ನಗರದ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಬಸವನಗುಡಿ ಸೇರಿದಂತೆ ಜನಜಂಗುಳಿಯಾಗುತ್ತಿದ್ದ ಮಾರುಕಟ್ಟೆ ಪ್ರದೇಶಗಳಲ್ಲಿ ಮಂಗಳವಾರ ಹೆಚ್ಚು ಗ್ರಾಹಕರು ಕಂಡುಬರಲಿಲ್ಲ. ಆದರೆ, ತರಕಾರಿ, ಅಲಂಕಾರಿ ವಸ್ತುಗಳು, ದಿನಸಿ, ಬೂದುಗುಂಬಳ, ಬಾಳೆಕಂದು ಖರೀದಿ ಜೋರಾಗಿತ್ತು.ಹಣ್ಣಿನ ದರಗಳು ಸ್ಥಿರವಾಗಿದ್ದು, ಸೊಪ್ಪಿನ ದರಗಳೆಲ್ಲ ದುಬಾರಿಯಾಗಿವೆ.