ಬೆಂಗಳೂರು: ‘ಚಿಕಿತ್ಸೆ ಕೊಡಿಸಲು ಅಪ್ಪನ ಬಳಿ ದುಡ್ಡಿಲ್ಲ, ದುಡಿಮೆಯೂ ಇಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ, ದಯವಿಟ್ಟು ಅಪ್ಪನಿಗೆ ಕೆಲಸ ಕೊಡಿ’ ಎಂದು ಕೃತಕ ಕೈ ಜೋಡಣೆ ಮಾಡಿಸಿಕೊಂಡಿರುವ ಎಂಟು ವರ್ಷದ ಬಾಲಕಿ ಮಾಡಿದ ಒಂದೇ ಮನವಿಗೆ ಕರಗಿದ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ಸ್ಥಳದಲ್ಲೇ ಮರುನೇಮಕ ಆದೇಶ ಹೊರಡಿಸಿ ಮಾನವೀಯತೆ ಮೆರೆದರು.