ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ವಸ್ತು ಸಾಗಿಸಲು ಡಿಸಿಪಿಯಿಂದ ಆಂಬುಲೆನ್ಸ್ ಬಳಕೆ?

Last Updated 2 ಅಕ್ಟೋಬರ್ 2019, 20:05 IST
ಅಕ್ಷರ ಗಾತ್ರ

ಬೆಂಗಳೂರು: ಮನೆ ವಸ್ತುಗಳನ್ನು ಸರ್ಕಾರಿ ಬಂಗಲೆಗೆ ಸ್ಥಳಾಂತರಿಸಲು ಕೇಂದ್ರ ಅಪರಾಧ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಅವರು ಆಂಬುಲೆನ್ಸ್ ಬಳಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇತ್ತೀಚೆಗಷ್ಟೇ ನಗರ ಕೇಂದ್ರ ಅಪರಾಧ ವಿಭಾಗಕ್ಕೆ ವರ್ಗಾವಣೆಯಾಗಿರುವ ಜೈನ್ ಅವರಿಗೆ ಶಿವಾಜಿನಗರದ ಮಸೀದಿ ಪಕ್ಕದ
ಸರ್ಕಾರಿ ಬಂಗಲೆ ನೀಡಲಾಗಿದೆ. ಹೀಗಾಗಿ, ಸರ್ಕಾರಿ ವಾಹನಗಳನ್ನು ಬಳಸಿ ಮನೆ ವಸ್ತುಗಳನ್ನು ಅವರು ಸ್ಥಳಾಂತರಿಸಿದ್ದಾರೆ.

ಆದರೆ, ಮನೆ ವಸ್ತುಗಳನ್ನು ಸ್ಥಳಾಂತರಿಸಲು ಆಂಬುಲೆನ್ಸ್ ಬಳಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜೈನ್, ‘ಈ ಹಿಂದೆ, ನಾನು ಕೆಎಸ್‍ಆರ್‌ಪಿ ಡಿಸಿಪಿ ಆಗಿದ್ದೆ. ಕೆಎಸ್‍ಆರ್‌ಪಿ ಮೂವರು ಸಿಬ್ಬಂದಿ ಮನೆ ವಸ್ತುಗಳನ್ನು ಸ್ಥಳಾಂತರಿಸಲು ಸಹಾಯ ಮಾಡಲು ಬಂದಿದ್ದರು. ಅದೇ ವೇಳೆ ಆಂಬುಲೆನ್ಸ್ ಸಿಬ್ಬಂದಿ ಘಟನೆಯೊಂದರ ಸಂಬಂಧ ಸಹಿ ಪಡೆಯಲು ಮನೆ ಬಳಿ ಬಂದಿದ್ದರು’ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಜೈನ್‌ ಅವರ ಹೇಳಿಕೆ ಗೊಂದಲ ಉಂಟು ಮಾಡಿದೆ. ಆಂಬುಲೆನ್ಸ್ ಮತ್ತು ಕೆಎಸ್‍ಆರ್‌ಪಿ ವಾಹನ ಬಳಸಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT