ಆದರೆ, ಮನೆ ವಸ್ತುಗಳನ್ನು ಸ್ಥಳಾಂತರಿಸಲು ಆಂಬುಲೆನ್ಸ್ ಬಳಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜೈನ್, ‘ಈ ಹಿಂದೆ, ನಾನು ಕೆಎಸ್ಆರ್ಪಿ ಡಿಸಿಪಿ ಆಗಿದ್ದೆ. ಕೆಎಸ್ಆರ್ಪಿ ಮೂವರು ಸಿಬ್ಬಂದಿ ಮನೆ ವಸ್ತುಗಳನ್ನು ಸ್ಥಳಾಂತರಿಸಲು ಸಹಾಯ ಮಾಡಲು ಬಂದಿದ್ದರು. ಅದೇ ವೇಳೆ ಆಂಬುಲೆನ್ಸ್ ಸಿಬ್ಬಂದಿ ಘಟನೆಯೊಂದರ ಸಂಬಂಧ ಸಹಿ ಪಡೆಯಲು ಮನೆ ಬಳಿ ಬಂದಿದ್ದರು’ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಜೈನ್ ಅವರ ಹೇಳಿಕೆ ಗೊಂದಲ ಉಂಟು ಮಾಡಿದೆ. ಆಂಬುಲೆನ್ಸ್ ಮತ್ತು ಕೆಎಸ್ಆರ್ಪಿ ವಾಹನ ಬಳಸಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.