ಮರುದಿನ ಬೆಳಿಗ್ಗೆ ಜ್ಯೋತಿ ಅವರ ಸಹೋದರಿ, ಮಕ್ಕಳನ್ನು ಅಂಗನವಾಡಿಗೆ ಬಿಟ್ಟು ಹೋಗಿದ್ದರು. ಕೆಲ ಹೊತ್ತಿನ ಬಳಿಕ ಅಂಗನವಾಡಿಗೆ ಬಂದಿದ್ದ ಸತೀಶ್, ಮಕ್ಕಳನ್ನು ಮನೆಗೆ ಕರೆತಂದಿದ್ದ. ಮಧ್ಯಾಹ್ನ 1 ಗಂಟೆಗೆ ಕೆಲಸ ಮುಗಿಸಿಕೊಂಡು ಜ್ಯೋತಿ, ಪತಿಯ ಮನೆಗೆ ಬಂದು ನೋಡಿದಾಗ, ಇಬ್ಬರು ಮಕ್ಕಳ ತಲೆ, ಮುಖಕ್ಕೆ ಹಲ್ಲೆ ನಡೆಸಿ ಹತ್ಯೆ ನಡೆಸಿರುವುದು ಬಯಲಿಗೆ ಬಂದಿತ್ತು. ಜ್ಯೋತಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.