ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ,‘ವಿಮರ್ಶೆ ಎನ್ನುವ ಪ್ರಕಾರ ಕಣ್ಮರೆಯಾಗುತ್ತಿರುವುದು ವಿಷಾದನೀಯ. ‘ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ’ ಎಂದು ಎಷ್ಟೇ ಹೆಗ್ಗಳಿಕೆ ಹೊಂದಿದ್ದರೂ ಈಗಿನ ಕಾಲದಲ್ಲಿ ಸಂವೇದನೆ ಇಲ್ಲದ, ಸೂಕ್ಷ್ಮತೆ ಬೇಕಾಗಿಲ್ಲದ, ಪ್ರೀತಿಗಿಂತಲೂ ದ್ವೇಷ, ಆಕ್ರೋಶವೇ ಮುಖ್ಯವಾಗಿರುವ ಸಾಹಿತ್ಯಗಳು ರಚನೆಯಾಗುತ್ತಿವೆ. ಕೇವಲ ರಾಷ್ಟ್ರ ಧೋರಣೆ ಹೊಂದಿರುವ ರಾಷ್ಟ್ರದಲ್ಲಿ ವಿಮರ್ಶಕರನ್ನೂ ರಾಷ್ಟ್ರದ್ರೋಹಿಗಳೆಂದು ಪರಿಗಣಿಸುವ ದಿನಗಳು ದೂರವಿಲ್ಲ. ಎಲ್ಲೆಲ್ಲೂ ರಾಷ್ಟ್ರಭಕ್ತಿ, ದೇಶದ್ರೋಹಿ, ಪ್ರಗತಿ ವಿರೋಧಿ ಎಂಬ ಪದಗಳೇ ಕೇಳುತ್ತಿವೆ’ ಎಂದು ಟೀಕಿಸಿದರು.