ಯಲಹಂಕ: ಇಲ್ಲಿನ ವಾಯುಪಡೆ ಕೇಂದ್ರದಲ್ಲಿ 202ನೇ ಪೈಲಟ್ ಕೋರ್ಸ್ ಹಾಗೂ 55ನೇ ಎ.ಎನ್-32 ಜಲಸಂಚಾರ ಪರಿವರ್ತನಾ ಕೋರ್ಸ್ ಪೂರ್ಣಗೊಳಿಸಿದ 24 ಅಧಿಕಾರಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ವಾಯುಪಡೆಯ ಏರ್ ಕಮಾಂಡರ್ ರಾಹುತ್ ಶೀತಲ್, ‘ಯುವಪದವೀಧರ ಅಧಿಕಾರಿಗಳ ಹೆಗಲಿಗೆ ಶೀಘ್ರದಲ್ಲೇ ದೊಡ್ಡ ಜವಾಬ್ದಾರಿ ಬೀಳಲಿದೆ. ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ಕಾರ್ಯಾಚರಣೆನಡೆಸಬೇಕಾಗುತ್ತದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿನಿರ್ವಹಿಸಬೇಕು’ ಎಂದು ತಿಳಿಸಿದರು.
ನಿಶ್ಚಿತ ವಿಂಗ್ ತರಬೇತಿ ಸಿಬ್ಬಂದಿ ಬಳಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲು ಅಗತ್ಯತರಬೇತಿ ದೊರೆಯಲಿದ್ದು, ವಾಯುಪಡೆಯ ನೀತಿ-ನಿಯಮಗಳನ್ನು ಅನುಸರಿಸಬೇಕು. ಯುವಪದವೀಧರರು ಸಮಗ್ರತೆ, ಏಕತೆ ಮತ್ತು ಹೊಣೆಗಾರಿಕೆಗಾಗಿ ಯಾವುದೇ ಸವಾಲುಗಳಿಗೆ ಸಿದ್ಧರಾಗಿರಬೇಕು ಎಂದು ಹೇಳಿದರು.