‘ಕದ್ದ ಬೈಕ್ಗಳಲ್ಲಿ ಆರೋಪಿಗಳು, ಜಾಲಿರೈಡ್ ಮಾಡುತ್ತಿದ್ದರು. ನಂತರ ಬೈಕ್ಗಳನ್ನು ಆಂಧ್ರಪ್ರದೇಶದಲ್ಲಿ ಮಾರುತ್ತಿದ್ದರು. ನಗರದ ಕೆ.ಆರ್.ಪುರ, ಬನಶಂಕರಿ, ಚನ್ನಮ್ಮನಕೆರೆ ಅಚ್ಚುಕಟ್ಟು, ಸುಬ್ರಹ್ಮಣ್ಯಪುರ, ಜಯನಗರ, ಕುಮಾರಸ್ವಾಮಿ ಲೇಔಟ್, ಜೆ.ಪಿ. ನಗರ, ಮೈಕೊ ಲೇಔಟ್, ಬೇಗೂರು, ಬಾಣಸವಾಡಿ, ಮಾರತ್ತಹಳ್ಳಿ, ಹೊಸಕೋಟೆ ಹಾಗೂ ಜಗಜೀವನ್ರಾಮ್ ನಗರ ಠಾಣೆಗಳ ವ್ಯಾಪ್ತಿಗಳಲ್ಲಿ ಆರೋಪಿಗಳು ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಹೇಳಿದರು.