ಆರ್ಥಿಕ ಕುಸಿತದ ಕಾರಣ ಎಂಎಸ್ಎಂಇ ಸ್ಥಿತಿಯ ಬಗ್ಗೆ ‘ಕಾಸಿಯಾ’ ಕಳವಳ ವ್ಯಕ್ತಪಡಿಸಿದೆ. ‘ಪರಿಸ್ಥಿತಿ ಸುಧಾರಿಸದಿದ್ದರೆ ಎಂಎಸ್ಎಂಇ ವಲಯದ ಉದ್ಯಮಗಳು ಬಾಗಿಲು ಮುಚ್ಚಬೇಕಾಗಬಹುದು ಎಂಬ ಆತಂಕಹೆಚ್ಚಾಗಿದೆ.ಸದ್ಯಕ್ಕೆ ಆರ್ಥಿಕ ಪುನಶ್ಚೇತನದ ಯಾವುದೇ ಭರವಸೆ ಇಲ್ಲದಿರುವುದರಿಂದ, ಸಾಲ ಮರುಪಾವತಿಗೆ ಇದ್ದ ವಿನಾಯಿತಿ ಅವಧಿಯನ್ನು ವಿಸ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ.