ಬೆಂಗಳೂರು ಕೇಂದ್ರ ವಲಯದ ಪೋಸ್ಟ್ಮಾಸ್ಟರ್ ಜನರಲ್ ಶೆವುಲಿ ಬರ್ಮನ್, ‘ಕೋವಿಡ್ನಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಸಮಯದಲ್ಲೂ ಅಂಚೆ ಇಲಾಖೆಯು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ. ಔಷಧಗಳು, ಪಿಪಿಇ ಕಿಟ್ ಹಾಗೂ ಮಾವಿನ ಹಣ್ಣು ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಗ್ರಾಹಕರು ಕಾಯ್ದಿರಿಸಿದ ದಿನವೇ ಅವರಿಗೆ ತಾಜಾ ಮಾವಿನ ಹಣ್ಣುಗಳನ್ನು ತಲುಪಿಸಲು ಎಲ್ಲ ಕ್ರಮ ಕೈಗೊಂಡಿದೆ. ಈ ವ್ಯವಸ್ಥೆಯನ್ನು ಸದ್ಯ ಬೆಂಗಳೂರಿಗಷ್ಟೇ ಸೀಮಿತಗೊಳಿಸಲಾಗಿದೆ. ಗ್ರಾಹಕರು www.karsirimangoes.karnataka.gov.in ವೆಬ್ಸೈಟ್ಗೆ ಭೇಟಿ ನೀಡಿ ವಿವಿಧ ತಳಿಯ ಮಾವಿನ ಹಣ್ಣು ಕಾಯ್ದಿರಿಸಬಹುದು’ ಎಂದು ತಿಳಿಸಿದರು.