‘ಬಡ್ತಿ ನೀಡುವುದಕ್ಕೆ ನ್ಯಾಯಮಂಡಳಿಯ ತಡೆಯಾಜ್ಞೆ ಇದ್ದರೂ ಲೋಕೋಪಯೋಗಿ ಮತ್ತು ಪಂಚಾಯತ್ರಾಜ್ ಇಲಾಖೆಗಳು ಬಡ್ತಿ ನೀಡಿವೆ. ಆದರೆ, ಜಲಸಂಪನ್ಮೂಲ ಇಲಾಖೆಗೆ ನೇಮಕಗೊಂಡವರಿಗೆ ಮಾತ್ರ ಬಡ್ತಿ ನೀಡಿಲ್ಲ. ಸರ್ಕಾರ ಈ ನಡೆ ಸರಿಯಲ್ಲ. ನ್ಯಾಯಮಂಡಳಿಯ ಅಂತಿಮ ತೀರ್ಪಿಗೆ ಒಳಪಟ್ಟು, ನಿಯಮ 32ರ ಅಡಿ ಸ್ವತಂತ್ರ ಪ್ರಭಾರ ದಲ್ಲಿಸಿ ಪದೋನ್ನತಿ ನೀಡಿದರೆ ಯಾರಿಗೂ ಅನ್ಯಾಯ ಆಗುವುದಿಲ್ಲ. ಅಂತಿಮ ಪಟ್ಟಿ ಸಿದ್ಧವಾದ ನಂತರ ಕ್ರೋಡೀಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ ಬ್ಯಾಗ್ಲಾಗ್ ಹುದ್ದೆಗಳಿಗೆ ನೇಮಕಗೊಂಡವರಿಗೆ ಬಡ್ತಿ ನೀಡಲು ಹಾಗೂ 2003ರಲ್ಲಿ ನೇಮಕಗೊಂಡವರನ್ನು ಜಲಸಂಪನ್ಮೂಲ ಇಲಾಖೆಯಲ್ಲಿ ವಿಲೀನಗೊಳಿಸಲು ಸಹಮತವಿದೆ’ ಎಂದೂ ಸಿವಿಲ್ ಎಂಜಿನಿಯರ್ಸ್ ಸಂಘ ತಿಳಿಸಿದೆ.