‘ಯಲಹಂಕದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್ಡೌನ್ಗೆ ಜನ ಸಹಕಾರ ನೀಡುತ್ತಿದ್ದಾರೆ. ಇಲ್ಲಿಯವರೆಗೂ ಯಾವುದೇ ಪಾಸಿಟಿವ್ ಪ್ರಕರಣ ಈ ಪ್ರದೇಶದಲ್ಲಿ ಆಗಿಲ್ಲ. ಈ ಸಂದರ್ಭದಲ್ಲಿ, ಪಾದರಾಯನಪುರದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಬಂಧಿತರಾಗಿ ಕ್ವಾರಂಟೈನ್ನಲ್ಲಿದ್ದ 35 ವ್ಯಕ್ತಿಗಳನ್ನು ಇಲ್ಲಿ ತಂದು ಇರಿಸಿರುವುದು ಸರಿಯಲ್ಲ’ ಎಂದು ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.