ಬೆಂಗಳೂರು: ‘ಕೊರೊನಾ ಸೋಂಕು ತಗುಲಿದರೆ ಭಯಪಡುವ, ಜೀವಕ್ಕೆ ಅಪಾಯ ಎದುರಾಯಿತು ಎಂದು ಭಾವಿಸುವ ಅಗತ್ಯವಿಲ್ಲ. ರೋಗನಿರೋಧಕ ಶಕ್ತಿ ಹೊಂದಿರುವ, ಉತ್ತಮ ಜೀವನ ಶೈಲಿ ರೂಢಿಸಿಕೊಂಡಿರುವ ಜನರಿಗೆ ಡೆಂಗಿ, ಮಲೇರಿಯಾ, ಚಿಕುನ್ ಗುನ್ಯಾ ರೋಗಗಳು ಕಾಡಿದಷ್ಟೂ ಕೊರೊನಾ ಸೋಂಕಿನಿಂದ ಸಮಸ್ಯೆಯಾಗುವುದಿಲ್ಲ’ ಎನ್ನುತ್ತಾರೆ ಯಲಹಂಕ ಸಂಚಾರ ಉಪ ವಿಭಾಗದ ಎಸಿಪಿ ಎಂ.ಎಚ್. ಸತೀಶ್.