ಆನೆಕಾಲು ಕಾಯಿಲೆಗೆ ಸಂಯೋಜಿತ ಔಷಧಿಯನ್ನು ಯಶಸ್ವಿಯಾಗಿ ಸಂಶೋಧಿಸಿದ ಡಾ. ನರಹರಿ ಅವರ ಸಾಧನೆಯನ್ನು ಅರಿತ ಓಸ್ಲರ್ ಶತಮಾನೋತ್ಸವ ಸ್ಮರಣೆ ಕಾರ್ಯಕ್ರಮದ ಸಂಘಟಕರು, ಅವರನ್ನೇ ಉದ್ಘಾಟನಾ ಭಾಷಣಕ್ಕೆ ಆಹ್ವಾನಿಸಿ ಗೌರವಿಸಿದ್ದಾರೆ. ಬಿಲ್ ಗೇಟ್ಸ್ ಫೌಂಡೇಷನ್ ಸಹ ಡಾ. ನರಹರಿ ಅವರ ಸಾಧನೆಯನ್ನು ಗುರುತಿಸಿದ್ದು, ಜಗತ್ತಿನ ಬೇರೆ ಭಾಗಗಳಲ್ಲೂ ಆನೆಕಾಲು ರೋಗದ ಸಂಯೋಜಿತ ಔಷಧಿ ದೊರೆಯುವಂತಾಗಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದೆ.