ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ‘ಮೆಟ್ರೊ ನಿಲ್ದಾಣಗಳು ಕೇವಲ ರೈಲುಗಳಲ್ಲಿ ಪ್ರಯಾಣಿಸುವ ಉದ್ದೇಶಕ್ಕೆ ಸೀಮಿತವಾಗಬಾರದು. ಕಚೇರಿ ಕೆಲಸ ಮುಗಿಸಿ, ಮನೆಗೆ ತೆರಳುವ ಜನರ ತರಕಾರಿ, ಕಿರಾಣಿ, ಶಾಪಿಂಗ್, ಇತರೆ ಉದ್ದೇಶಗಳನ್ನೂ ಅವು ಪೂರೈಸುವಂತಾಗಬೇಕು. ಇದರಿಂದ ರಸ್ತೆಗಳಲ್ಲಿ ಜನರ ಸಂಚಾರ ಕಡಿಮೆಯಾಗುವ ಜತೆಗೆ ವಾಹನ ದಟ್ಟಣೆಯನ್ನೂ ನಿಯಂತ್ರಿಸಬಹುದು’ ಎಂದು ಸಲಹೆ ನೀಡಿದರು.