ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಕೆಲ ಸಿಬ್ಬಂದಿಗೆ ₹1.50 ಲಕ್ಷ ಸಂಬಳ ಇದ್ದರೆ, ಮತ್ತೆ ಕೆಲವರಿಗೆ ₹15 ಸಾವಿರ ಇದೆ. ಈ ರೀತಿಯ ತಾರತಮ್ಯ ಏಕೆ ಎಂಬುದು ಅರ್ಥವೇ ಆಗದ ವಿಷಯ. ಸದ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಈ ತಾರತಮ್ಯ ಸರಿಪಡಿಸುವ ಕೆಲಸ ಆಗಬೇಕಿದೆ. ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡೋಣ’ ಎಂದರು.