ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ’ಕೋವಿಡ್ ನಡುವೆಯೂ ನ್ಯಾಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ನೆಲಮಹಡಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ.ಹೈಕೋರ್ಟ್ಗೆ ಅವಶ್ಯವಿರುವ ಕಚೇರಿಯ ಜಾಗ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇದೇ 14ರೊಳಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ, ಮುಂದಿನ ವಿಚಾರಣೆ ವೇಳೆಗೆ ನ್ಯಾಯಾಲಯವೇ ಕೆಜಿಐಡಿ ಹಾಗೂ ವಕೀಲರ ಪರಿಷತ್ ಕಟ್ಟಡ ಖಾಲಿ ಮಾಡಿಸಲು ಆದೇಶ ಹೊರಡಿಸಲಿದೆ’ ಎಂದು ಎಚ್ಚರಿಸಿತು.