ಕಳೆದ ವಾರ ಪಕ್ಷದ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ಅತೃಪ್ತ ಶಾಸಕರ ಸಭೆ ನಡೆಯಬೇಕಿತ್ತು. ಕೊನೆಯ ಕ್ಷಣದಲ್ಲಿ ಅದು ಮುಂದಕ್ಕೆ ಹೋಗಿತ್ತು. ಈ ನಡುವೆ ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡು ರಾಜ್ಯಕ್ಕೆ ಮರಳಿದ್ದರಿಂದ ಗಮನವೆಲ್ಲ ಅವರತ್ತವೇ ಕೇಂದ್ರೀಕೃತವಾಗಿತ್ತು. ಡಿಕೆಶಿ ‘ಹವಾ’ ತಣ್ಣಗಾಗುತ್ತಲೇ ಮತ್ತೆ ಜೆಡಿಎಸ್ ಶಾಸಕರ ಅತೃಪ್ತಿಯ ಕಾವು ಏರತೊಡಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.