ಬೆಂಗಳೂರು: ಕೊರೊನಾ ಲಾಕ್ಡೌನ್ನಿಂದ ಆಹಾರ ಸಮಸ್ಯೆ ಎದುರಾಗಿರುವ ಗೋವಿಂದರಾಜ ನಗರ ಹಾಗೂ ವಿಜಯನಗರ ವಾರ್ಡ್ನ ಹತ್ತು ಸಾವಿರ ಬಡ ಕುಟುಂಬಗಳಿಗೆ ವಸತಿ ಸಚಿವ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಸೋಮವಾರ ಆಹಾರ ಕಿಟ್ ವಿತರಿಸಲಾಯಿತು.
ಬಾಲಗಂಗಾಧರನಾಥ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ "ಜನ ಸಾಮಾನ್ಯರ ಸ್ಪಂದನೆ' ಹೆಸರಿನಲ್ಲಿ ಮಹಿಳೆಯರು ಹಾಗೂ ಕೂಲಿ ಕಾರ್ಮಿಕರಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಉಪ್ಪು, ಸಕ್ಕರೆ, ಮೈದಾ ಇನ್ನಿತರ ದಿನಸಿ ಪದಾರ್ಥಗಳನ್ನೊಳಗೊಂಡ ಆಹಾರ ಕಿಟ್ ವಿತರಣೆ, ಆರೋಗ್ಯ ತಪಾಸಣೆ ಕಿಟ್, ಸೋಂಕು ನಿವಾರಕ ಔಷಧಿ ಸಿಂಪಡನೆ ಯಂತ್ರಗಳು ಹಾಗೂ ಅಗ್ನಿಶಾಮಕ ವಾಹನ ಮೂಲಕ ರಾಸಯನಿಕ ಸಿಂಪಡನೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.