‘ಕಾನೂನು ಸುವ್ಯವಸ್ಥೆ ಹಾಳು ಮಾಡಿ ಜನರನ್ನು ಭಯಭೀತಗೊಳಿಸುವ ಸಲುವಾಗಿ ನಡೆಸಿದ ಪೂರ್ವನಿಯೋಜಿತ ದಾಳಿ ಇದಾಗಿದೆ.ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆಯನ್ನೂ ಗಲಭೆಕೋರರು ಉಲ್ಲಂಘಿಸಿದ್ದಾರೆ. ಹಿಂಸಾಚಾರದಲ್ಲಿ ಪೊಲೀಸರು ಸಂತ್ರಸ್ತರಾಗಿದ್ದು, ಎನ್ಐಎ ಅಥವಾ ಯಾವುದೇ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದಲೇ ತನಿಖೆಯಾಗಬೇಕು’ ಎಂದು ಶೇಷಾದ್ರಿಪುರದ ನಿವಾಸಿ ಗಿರೀಶ್ ಭಾರದ್ವಾಜ್ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.