‘ಈ ಸಾವುಗಳು ಒಂದೇ ರೀತಿಯದ್ದಾಗಿದ್ದು, ಕೊರೊನಾ ಸೋಂಕು ತಗುಲಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಆದರೆ, ಅಧಿಕೃತವಾಗಿ ಇದನ್ನು ಘೋಷಿಸಲು ಆಗಿಲ್ಲ. ಹೃದಯಾಘಾತ ಮತ್ತು ನ್ಯೂಮೊನಿಯಾದಿಂದ ಮೃತಪಟ್ಟಿದ್ದಾರೆ ಎಂಬ ಕಾರಣಕ್ಕೆ ಇವರ ಶವಸಂಸ್ಕಾರದಲ್ಲಿ ಹೆಚ್ಚು ಜನ ಸೇರಿದ್ದಾರೆ. ನಾನು ನೋಡಿದಂತೆ, ಒಬ್ಬರ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಇಲ್ಲೆಲ್ಲ ಹಸ್ತಲಾಘವ ಮಾಡುತ್ತಾರೆ ಹಾಗೂ ತಬ್ಬಿಕೊಂಡು ಸಾಂತ್ವನ ಹೇಳುತ್ತಾರೆ. ಬೇರೆ ಬೇರೆ ಊರುಗಳಿಂದಲೂ ಬಂದಿರುತ್ತಾರೆ. ಸೋಂಕು ಹರಡಲು ಇದೇ ಮೂಲ’ ಎಂದು ಅವರು ಅಭಿಪ್ರಾಯಪಟ್ಟರು.