ಶಿವಕುಮಾರ್ ಸಹ ಕರೆ ಮಾಡಿ, ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು.ಪುನೀತ್, ‘ನಾನು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿಲ್ಲ. ಕ್ಷಮೆ ಕೇಳುವುದಿಲ್ಲ. ಬೇಕಾದರೆ ಚಾಮರಾಜಪೇಟೆಗೆ ಬರುತ್ತೇನೆ. ನೀನು ಬಾ’ ಎಂದಿದ್ದರು. ಶಿವಕುಮಾರ್, ತಮ್ಮ ಗುಂಪಿನ ಜೊತೆ ಚಾಮರಾಜಪೇಟೆಗೆ ಬಂದಿದ್ದರು. ಪುನೀತ್ ಸಹ ಸ್ಥಳದಲ್ಲಿದ್ದರು. ಮಾತಿಗೆ ಮಾತು ಬೆಳೆದು ಎರಡೂ ಗುಂಪಿನ ನಡುವೆ ಗಲಾಟೆ ನಡೆದಿದೆ.