‘ಈ ಬಗ್ಗೆ ಈ ಹಿಂದೆ ಪ್ರಜಾವಾಣಿಯಲ್ಲಿ ವರದಿ ಬಂದಾಗ, ಬಿಬಿಎಂಪಿ ಅಧಿಕಾರಿಗಳು, ಪಂಚಾಯಿತಿ ಸಿಬ್ಬಂದಿ ಸರಿ ಮಾಡಿಸಿದ್ದರು. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮತ್ತೆ ಸಮಸ್ಯೆಯಾಗಿದೆ. ಕೊಳಚೆ ನೀರಿನ ವಾಸನೆ ತಡೆಯಲು ಆಗುತ್ತಿಲ್ಲ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಅಕ್ಕ–ಪಕ್ಕದ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ’ ಎಂದು ಕೆಂಗೇರಿಯಲ್ಲಿ ಕಾಲೇಜೊಂದರ ಪ್ರಾಚಾರ್ಯರಾಗಿರುವ ಸ್ಥಳೀಯ ನಿವಾಸಿ ರಮೇಶ್ ಹೇಳಿದರು.