ಬೆಂಗಳೂರು: ಜ್ಯುವೆಲ್ಸ್ ಆಫ್ ಇಂಡಿಯಾ ವತಿಯಿಂದ ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆಯೋಜಿಸಿರುವ ಆಭರಣಗಳ ಮಾರಾಟ ಮತ್ತು ಪ್ರದರ್ಶನ ಮೇಳವನ್ನು ನಟಿ ಪ್ರಿಯಾಂಕ ಉಪೇಂದ್ರ ಶುಕ್ರವಾರ ಉದ್ಘಾಟಿಸಿದರು.
ಅ.18ರವರೆಗೆ ನಡೆಯಲಿರುವ ಚಿನ್ನಾಭರಣ ಮೇಳದಲ್ಲಿ ಭಾರತದ ಅತ್ಯಂತ ಪುರಾತನ ಹಾಗೂ ವಿವಿಧ ವಿನ್ಯಾಸಗಳ ಅಪರೂಪದ ಚಿನ್ನಾಭರಣಗಳನ್ನು ಪ್ರದರ್ಶಿಸಲಾಗುತ್ತಿದೆ.
‘ದಸರಾ ಸಂದರ್ಭದಲ್ಲಿ ದೇಶದ ಎಲ್ಲ ಅತ್ಯುತ್ತಮ ಆಭರಣಗಳು ಒಂದೇ ಸೂರಿನಡಿ ಪ್ರದರ್ಶನವಾಗುತ್ತಿವೆ. ಚಿನ್ನಾಭರಣ ಖರೀದಿಗೆಈ ಮೇಳ ಅತ್ಯುತ್ತಮ ಸಮಯ. ವಿನೂತನ ಹಾಗೂ ಆಕರ್ಷಕ ಆಭರಣ ಮೇಳದಲ್ಲಿ ಬೆಂಗಳೂರಿನ ಮಹಿಳೆಯರಷ್ಟೇ ಅಲ್ಲದೆ, ರಾಜ್ಯದ ಎಲ್ಲರೂ ಭಾಗವಹಿಸಬೇಕು’ ಎಂದು ಪ್ರಿಯಾಂಕ ಉಪೇಂದ್ರ ಹೇಳಿದರು.
ಮೇಳದ ಸಂಚಾಲಕ ಸಂದೀಪ್ ಬೇಕಲ್,‘ಎಲ್ಲ ಅಭಿರುಚಿಯ ಹಾಗೂ ಎಲ್ಲ ವರ್ಗದವರ ದರಗಳಿಗೆ ಹೊಂದಿಕೊಳ್ಳುವ ಆಭರಣಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುತ್ತಿದೆ’ ಎಂದರು.