ಉಡುಪಿ ಮೂಲದವರಾದ ಶ್ರೀಧರ್ ಹೊಳ್ಳ 1972ರಲ್ಲಿ ಬಸವನಗುಡಿ ಟೆಂಪಲ್ ರಸ್ತೆಯಲ್ಲಿ ದ್ವಾರಕಾವನ್ನು ಒಂದು ಸಣ್ಣ ಉಪಾಹಾರ ಗೃಹವನ್ನಾಗಿ ಪ್ರಾರಂಭಿಸಿದ್ದರು. 2005ರಲ್ಲಿ ದ್ವಾರಕಾವನ್ನು ಎನ್.ಆರ್.ಕಾಲೊನಿಗೆ ವರ್ಗಾಯಿಸಲಾಗಿತ್ತು. ಇಲ್ಲಿ ಸಿಗುವ ಖಾಲಿ ದೋಸೆ, ಕ್ಯಾರೆಟ್ ಹಲ್ವಾ ಮತ್ತು ಪುರಿ ಸವಿಯಲು ಸಾಕಷ್ಟು ಗ್ರಾಹಕರಿದ್ದಾರೆ. ಹೋಟೆಲ್ ಇದೇ ವರ್ಷ 50 ವಸಂತಗಳನ್ನು ಪೂರೈಸಿದೆ.