ಮಿಂಟೋ ಆಸ್ಪತ್ರೆ ವೈದ್ಯರ ಮುಷ್ಕರ ಪ್ರಕರಣ ಸಂಬಂಧ ಸರ್ಕಾರ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.ವೈದ್ಯರು ಸರ್ಕಾರಿ ಸೇವಕರು, ಡಿಸಿಎಂ ಅವರ ಜವಾಬ್ದಾರಿ ಮಾಡುತ್ತಿಲ್ಲ. ಅವರೇ ಅಸಹಾಯಕರಾದರೆ ಹೇಗೆ,ವೈದ್ಯರಿಗೆ ಮುಷ್ಕರ ಮಾಡುವ ಹಕ್ಕಿದೆ, ಆದರೂ ಮಾನವೀಯತೆ ದೃಷ್ಟಿಯಿಂದ ವೈದ್ಯರು ನೋಡಬೇಕು, ಸಮಸ್ಯೆ ಏನಿದೆ ಅನ್ನೋದನ್ನ ಸರ್ಕಾರ ಗುರುತಿಸಬೇಕು ಎಂದಿದ್ದಾರೆ.