ಬೆಳ್ತಂಗಡಿಯ ನೆರೆಸಂತ್ರಸ್ತ ಆರು ಕುಟುಂಬಗಳಿಗೆ ₹2.5 ಲಕ್ಷ ಸಹಾಯಧನ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕ್ರಮವಾಗಿ ಜ್ಯೋತಿಕಾ ಎನ್. (ಶೇ 99.04) ಹಾಗೂ ಆಯುಷ್ ಎಸ್. ಪೂಜಾರಿ (ಶೇ 98.75) ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 70 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸ್ವಯಂಪ್ರೇರಿತ ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.