‘ಪಂಚಭೂತಗಳಲ್ಲಿ ಮೋಸ ಎಂಬುದಿಲ್ಲ. ಸೂರ್ಯ, ಚಂದ್ರರಲ್ಲಿ ಭೇದಭಾವವೂ ಇಲ್ಲ. ಆದರೆ, ಜನರ ಮನಸ್ಸುಗಳಲ್ಲಿ ವಂಚನೆ ಇದೆ ಎಂದ ಅವರು, ರಾಷ್ಟ್ರಕವಿ ಕುವೆಂಪು ಹೇಳಿದಂತೆ ಕೆಟ್ಟದ್ದನ್ನು ತ್ಯಜಿಸಬೇಕು. ಒಳಿತು ಅಳವಡಿಸಿಕೊಳ್ಳಬೇಕು. ಮಾತೃಭಾಷೆಯನ್ನು ಪ್ರೀತಿಸಿ, ಅನ್ಯಭಾಷೆಗಳ ಬಗ್ಗೆಯೂ ಗೌರವ ಬೆಳೆಸಿಕೊಳ್ಳಬೇಕು’ ಎಂದು ಕರೆ ನೀಡಿದರು.