‘ಗ್ರಾಮಸಭಾದಿಂದ ಹಿಡಿದು ಏರಿಯಾ ಸಭಾ, ವಾರ್ಡ್ ಕಮಿಟಿಯ ಸಲಹೆ ಪಡೆದು, ಯಾವ ರಸ್ತೆ ವಿಸ್ತರಣೆ ಮಾಡಬೇಕು, ಯಾವುದೇ ಬೇಡ ಎಂಬ ಬಗ್ಗೆ ಸಲಹೆ ಸೂಚನೆ ಪಡೆದು ನಿರ್ಧರಿಸಬೇಕು.ಮಹಾನಗರ ಪಾಲಿಕೆ ಕಾಯ್ದೆಯಡಿ 24ನೇ ತಿದ್ದುಪಡಿಯಲ್ಲಿ ಈ ಬಗ್ಗೆ ನಿರ್ದಿಷ್ಟವಾಗಿ ಹೇಳಿದ್ದಾರೆ. ಹೈಕೋರ್ಟ್ ಕೂಡ ಇದನ್ನೇ ಹೇಳಿದೆ. ಈ ಎಲ್ಲ ಸಮಿತಿಗಳ ಜೊತೆಗೆ ಮಹಾನಗರ ಯೋಜನಾ ಸಮಿತಿ ಸೇರಿಕೊಂಡು ನಗರಕ್ಕೆ ಸಮಗ್ರ ಯೋಜನೆ ರೂಪಿಸಬೇಕು. ಆದರೆ, ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಸಾವಿರಾರು ಮರಗಳನ್ನು ಕಡಿಯಲು ಕೆಆರ್ಡಿಸಿಎಲ್ ಮುಂದಾಗಿರುವುದು ಪ್ರಜಾಸತ್ತಾತ್ಮಕ ವಿರೋಧಿ ನಡೆ’ ಎಂದು ಅವರು ಹೇಳಿದರು. ‘ಟಿಂಬರ್ ಲಾಬಿ ಮತ್ತು ಗುತ್ತಿಗೆ ದಾರರ ಲಾಬಿಗೆ ಮಣಿದು ಕೆಆರ್ಡಿಸಿಎಲ್ ಈ ಕ್ರಮಕ್ಕೆ ಮುಂದಾಗಿದೆ’ ಎಂದು ದೂರಿದರು.