ಮಾಜಿ ಕಾರ್ಮಿಕ ಮಂತ್ರಿ ಎಸ್.ಕೆ. ಕಾಂತ, ಸಾಹಿತಿಗಳಾದ ದೇವನೂರ ಮಹಾದೇವ, ಪುರುಷೋತ್ತಮ ಬಿಳಿಮಲೆ, ಕಮಲಾ ಹಂಪನಾ, ರಹಮತ್ ತರೀಕೆರೆ, ವಿಜಯಾ, ಪ್ರಾಧ್ಯಾಪಕರಾದ ಎ.ಆರ್. ವಾಸವಿ, ಅಲ್ಲಮಪ್ರಭು ಬೆಟ್ಟದೂರು, ಮಹಿಳಾ ಚಳವಳಿಗಾರ್ತಿ ದು. ಸರಸ್ವತಿ, ಮಾಜಿ ಸಚಿವ ಎಚ್. ಏಕಾಂತಯ್ಯ, ಪರಿಸರ ತಜ್ಞೆ ತಾರಾ ರಾವ್ ಹಾಗೂ ವೈದ್ಯ ಡಾ. ಶ್ರೀನಿವಾಸ್ ಕಕ್ಕಿಲಾಯ ಅವರು ಈ ಅಭಿಯಾನ ಕೈಗೊಂಡಿದ್ದಾರೆ. ‘ಈ ಅವಕಾಶ ನಮ್ಮ ಕೈ ತಪ್ಪಿ ಹೋಗದಿರಲಿ… ಕರ್ನಾಟಕ ಮತ್ತೆ ಕತ್ತಲೆಗೆ ಜಾರದಿರಲಿ…’ ಎಂದು ಅವರು ಕರೆ ನೀಡಿದ್ದಾರೆ.