<p><strong>ಬೆಂಗಳೂರು</strong>: ರೈತರ ಅಗತ್ಯಗಳಿಗೆ ಪೂರಕವಾಗಿ ಹವಾಮಾನಕ್ಕೆ ಅನುಗುಣವಾಗಿ ಜೈವಿಕ ನಿಯಂತ್ರಕಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಭಾರತ ಸರ್ಕಾರದ ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ ದಳವಾಯಿ ತಿಳಿಸಿದರು.</p>.<p>ಐಸಿಎಆರ್–ಎನ್ಬಿಎಐಆರ್ ಯಲಹಂಕ ಕ್ಯಾಂಪಸ್ನಲ್ಲಿ ಶನಿವಾರ ನಡೆದ ‘ಬಯೋಕಂಟ್ರೋಲ್ ಎಕ್ಸ್ಪೋ’ 32ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>ಹವಾಮಾನ ಬದಲಾವಣೆಯ ಬಗೆಗಿನ ನಿಖರ ಸಂಶೋಧನೆ ಮಾಡಬೇಕು ಎಂದರು.</p>.<p>ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ಸದಸ್ಯ ಮೇಜರ್ ಸಿಂಗ್ ಮಾತನಾಡಿ, ‘ವೈರಸ್-ವೆಕ್ಟರ್ ಸಂಬಂಧಗಳ ಮೇಲೆ ತೀವ್ರವಾದ ಸಂಶೋಧನೆ ಅಗತ್ಯ’ ಎಂದು ಪ್ರತಿಪಾದಿಸಿದರು.</p>.<p>ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ ಕಾರ್ಯದರ್ಶಿ ಅರ್ಚನಾ ಸಿನ್ಹಾ ಅವರು ರಾಷ್ಟ್ರೀಯ ಮಟ್ಟದಲ್ಲಿ ಜೈವಿಕ ಕೀಟನಾಶಕಗಳ ನೋಂದಣಿಗೆ ಹೊಸದಾಗಿ ಸರಳೀಕೃತ ಮಾರ್ಗಸೂಚಿಗಳ ಕುರಿತು ಮಾತನಾಡಿದರು. </p>.<p>ಪ್ರಗತಿಪರ ರೈತರನ್ನು ಸನ್ಮಾನಿಸಿ, ಕೃಷಿ ಸಾಮಗ್ರಿ ವಿತರಿಸಲಾಯಿತು. ‘ತಾಯಿಯ ಹೆಸರಿನಲ್ಲಿ ಒಂದು ಮರ’ ಅಭಿಯಾನ ನಡೆಸಲಾಯಿತು.</p>.<p>ಐಸಿಎಆರ್-ಎನ್ಬಿಎಐಆರ್ನ ನಿರ್ದೇಶಕ ಎಸ್.ಎನ್. ಸುಶೀಲ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಕೃಷಿ ಯಂತ್ರೋಪಕರಣ ತಯಾರಕರ ಸಂಘದ (ಅಮ್ಮ) ಅಧ್ಯಕ್ಷ ಜ್ಞಾನೇಶ್ವರ ವಾಘಚೌರೆ, ವಿಜ್ಞಾನಿಗಳಾದ ಶ್ರೀದೇವಿ ಮತ್ತು ದೀಪಾ ಭಗತ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರೈತರ ಅಗತ್ಯಗಳಿಗೆ ಪೂರಕವಾಗಿ ಹವಾಮಾನಕ್ಕೆ ಅನುಗುಣವಾಗಿ ಜೈವಿಕ ನಿಯಂತ್ರಕಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಭಾರತ ಸರ್ಕಾರದ ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ ದಳವಾಯಿ ತಿಳಿಸಿದರು.</p>.<p>ಐಸಿಎಆರ್–ಎನ್ಬಿಎಐಆರ್ ಯಲಹಂಕ ಕ್ಯಾಂಪಸ್ನಲ್ಲಿ ಶನಿವಾರ ನಡೆದ ‘ಬಯೋಕಂಟ್ರೋಲ್ ಎಕ್ಸ್ಪೋ’ 32ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>ಹವಾಮಾನ ಬದಲಾವಣೆಯ ಬಗೆಗಿನ ನಿಖರ ಸಂಶೋಧನೆ ಮಾಡಬೇಕು ಎಂದರು.</p>.<p>ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ಸದಸ್ಯ ಮೇಜರ್ ಸಿಂಗ್ ಮಾತನಾಡಿ, ‘ವೈರಸ್-ವೆಕ್ಟರ್ ಸಂಬಂಧಗಳ ಮೇಲೆ ತೀವ್ರವಾದ ಸಂಶೋಧನೆ ಅಗತ್ಯ’ ಎಂದು ಪ್ರತಿಪಾದಿಸಿದರು.</p>.<p>ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ ಕಾರ್ಯದರ್ಶಿ ಅರ್ಚನಾ ಸಿನ್ಹಾ ಅವರು ರಾಷ್ಟ್ರೀಯ ಮಟ್ಟದಲ್ಲಿ ಜೈವಿಕ ಕೀಟನಾಶಕಗಳ ನೋಂದಣಿಗೆ ಹೊಸದಾಗಿ ಸರಳೀಕೃತ ಮಾರ್ಗಸೂಚಿಗಳ ಕುರಿತು ಮಾತನಾಡಿದರು. </p>.<p>ಪ್ರಗತಿಪರ ರೈತರನ್ನು ಸನ್ಮಾನಿಸಿ, ಕೃಷಿ ಸಾಮಗ್ರಿ ವಿತರಿಸಲಾಯಿತು. ‘ತಾಯಿಯ ಹೆಸರಿನಲ್ಲಿ ಒಂದು ಮರ’ ಅಭಿಯಾನ ನಡೆಸಲಾಯಿತು.</p>.<p>ಐಸಿಎಆರ್-ಎನ್ಬಿಎಐಆರ್ನ ನಿರ್ದೇಶಕ ಎಸ್.ಎನ್. ಸುಶೀಲ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಕೃಷಿ ಯಂತ್ರೋಪಕರಣ ತಯಾರಕರ ಸಂಘದ (ಅಮ್ಮ) ಅಧ್ಯಕ್ಷ ಜ್ಞಾನೇಶ್ವರ ವಾಘಚೌರೆ, ವಿಜ್ಞಾನಿಗಳಾದ ಶ್ರೀದೇವಿ ಮತ್ತು ದೀಪಾ ಭಗತ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>