<p><strong>ಬೆಂಗಳೂರು:</strong> ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಅಂದಾಜು ₹30.10 ಕೋಟಿ ಮೌಲ್ಯದ 9.21 ಎಕರೆ ಸರ್ಕಾರಿ ಜಮೀನನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.</p>.<p>ನಗರ ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ತಮ್ಮ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಕಾಲುವೆ, ಗೋಮಾಳ, ಕುಂಟೆ, ತೋಪು, ಸ್ಮಶಾನ, ಗುಂಡುತೋಪು, ಸರ್ಕಾರಿ ಗೋಮಾಳ ತೆರವು ಕಾರ್ಯಾಚರಣೆ ಕೈಗೊಂಡರು ಎಂದು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.</p>.<p>ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ದೊಡ್ಡಬನಹಳ್ಳಿ ಗ್ರಾಮದಲ್ಲಿ ₹60 ಲಕ್ಷ ಮೌಲ್ಯದ 4 ಗುಂಟೆ ಕಾಲುವೆ, ಬಿದರಹಳ್ಳಿ ಹೋಬಳಿ ದೊಡ್ಡಬನಹಳ್ಳಿ ಗ್ರಾಮದಲ್ಲಿ ₹2.50 ಕೋಟಿ ಮೌಲ್ಯದ 15 ಗುಂಟೆ ಗೋಮಾಳ, ಕಟ್ಟುಗೊಲ್ಲಹಳ್ಳಿಯಲ್ಲಿ ₹1 ಕೋಟಿ ಮೌಲ್ಯದ 5 ಗುಂಟೆ ಕುಂಟೆ, ಬಳಿಶಿವಾಲೆಯಲ್ಲಿ ₹1 ಕೋಟಿ ಮೌಲ್ಯದ 13 ಗುಂಟೆ ತೋಪು ವಶಪಡಿಸಿಕೊಳ್ಳಲಾಗಿದೆ.</p>.<p>ವರ್ತೂರು ಹೋಬಳಿಯ ವಾಲೇಪುರ ಗ್ರಾಮದಲ್ಲಿ ₹80 ಲಕ್ಷ ಮೌಲ್ಯದ 4 ಗುಂಟೆ ಸ್ಮಶಾನ, ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ದೊಡ್ಡಮಾರನಹಳ್ಳಿ ಗ್ರಾಮದಲ್ಲಿ ₹50 ಲಕ್ಷ ಮೌಲ್ಯದ 20 ಗುಂಟೆ ಸ್ಮಶಾನ, ಯಲಹಂಕ ತಾಲ್ಲೂಕಿನ ಹೆಸರುಘಟ್ಟ ಹೋಬಳಿಯ ಅರಕೆರೆ ಗ್ರಾಮದಲ್ಲಿ ₹1.20 ಕೋಟಿ ಮೌಲ್ಯದ 20 ಗುಂಟೆ ಗುಂಡುತೋಪು, ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಬೊಮ್ಮಶೆಟ್ಟಿಹಳ್ಳಿಯಲ್ಲಿ ₹22.50 ಕೋಟಿ ಮೌಲ್ಯದ 7.20 ಎಕರೆ ಸರ್ಕಾರಿ ಗೋಮಾಳ ವಶಕ್ಕೆ ಪಡೆದುಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಅಂದಾಜು ₹30.10 ಕೋಟಿ ಮೌಲ್ಯದ 9.21 ಎಕರೆ ಸರ್ಕಾರಿ ಜಮೀನನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.</p>.<p>ನಗರ ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ತಮ್ಮ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಕಾಲುವೆ, ಗೋಮಾಳ, ಕುಂಟೆ, ತೋಪು, ಸ್ಮಶಾನ, ಗುಂಡುತೋಪು, ಸರ್ಕಾರಿ ಗೋಮಾಳ ತೆರವು ಕಾರ್ಯಾಚರಣೆ ಕೈಗೊಂಡರು ಎಂದು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.</p>.<p>ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ದೊಡ್ಡಬನಹಳ್ಳಿ ಗ್ರಾಮದಲ್ಲಿ ₹60 ಲಕ್ಷ ಮೌಲ್ಯದ 4 ಗುಂಟೆ ಕಾಲುವೆ, ಬಿದರಹಳ್ಳಿ ಹೋಬಳಿ ದೊಡ್ಡಬನಹಳ್ಳಿ ಗ್ರಾಮದಲ್ಲಿ ₹2.50 ಕೋಟಿ ಮೌಲ್ಯದ 15 ಗುಂಟೆ ಗೋಮಾಳ, ಕಟ್ಟುಗೊಲ್ಲಹಳ್ಳಿಯಲ್ಲಿ ₹1 ಕೋಟಿ ಮೌಲ್ಯದ 5 ಗುಂಟೆ ಕುಂಟೆ, ಬಳಿಶಿವಾಲೆಯಲ್ಲಿ ₹1 ಕೋಟಿ ಮೌಲ್ಯದ 13 ಗುಂಟೆ ತೋಪು ವಶಪಡಿಸಿಕೊಳ್ಳಲಾಗಿದೆ.</p>.<p>ವರ್ತೂರು ಹೋಬಳಿಯ ವಾಲೇಪುರ ಗ್ರಾಮದಲ್ಲಿ ₹80 ಲಕ್ಷ ಮೌಲ್ಯದ 4 ಗುಂಟೆ ಸ್ಮಶಾನ, ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ದೊಡ್ಡಮಾರನಹಳ್ಳಿ ಗ್ರಾಮದಲ್ಲಿ ₹50 ಲಕ್ಷ ಮೌಲ್ಯದ 20 ಗುಂಟೆ ಸ್ಮಶಾನ, ಯಲಹಂಕ ತಾಲ್ಲೂಕಿನ ಹೆಸರುಘಟ್ಟ ಹೋಬಳಿಯ ಅರಕೆರೆ ಗ್ರಾಮದಲ್ಲಿ ₹1.20 ಕೋಟಿ ಮೌಲ್ಯದ 20 ಗುಂಟೆ ಗುಂಡುತೋಪು, ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಬೊಮ್ಮಶೆಟ್ಟಿಹಳ್ಳಿಯಲ್ಲಿ ₹22.50 ಕೋಟಿ ಮೌಲ್ಯದ 7.20 ಎಕರೆ ಸರ್ಕಾರಿ ಗೋಮಾಳ ವಶಕ್ಕೆ ಪಡೆದುಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>