‘ಆರೋಪಿಯು ಕಾಮಾಕ್ಷಿಪಾಳ್ಯ, ಬಸವೇಶ್ವರನಗರ, ಕೆ.ಪಿ.ಅಗ್ರಹಾರ ಠಾಣೆಯ ವ್ಯಾಪ್ತಿ ಸೇರಿದಂತೆ ನಗರದ ವಿವಿಧೆಡೆ 85ಕ್ಕೂ ಹೆಚ್ಚು ಕಡೆ ಕಳ್ಳತನ ನಡೆಸಿದ್ದ. ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲೂ ಕಳವು ಮಾಡಿದ್ದ. ಹಗಲು ಹೊತ್ತಿನಲ್ಲೇ ಕನ್ನ ಹಾಕಿ ಕಳವು ಮಾಡಿದ್ದ ಎರಡು ಪ್ರಕರಣಗಳು ಹಾಗೂ ರಾತ್ರಿ ಕನ್ನ ಹಾಕಿದ್ದ ಒಂದು ಪ್ರಕರಣ ಹಾಗೂ ತಲಾ ಒಂದು ಮನೆಗಳವು ಹಾಗೂ ಸಾಮಾನ್ಯ ಕಳವು ಪ್ರಕರಣಗಳಿಗೆ ಸಂಬಂಧಿಸಿದ ಆಭರಣಗಳನ್ನು ಆರೋಪಿಯಿಂದ ಜಪ್ತಿ ಮಾಡಲಾಗಿದೆ’ ಎಂದರು.