‘ಜಾಗತಿಕ ಪರಿಸರ ದಿನ, ಸಾಗರ ದಿನ ಮತ್ತು ಮರುಭೂಮಿ ನಿರೋಧಕ ದಿನಗಳಿಗೆ ಪೂರಕವಾಗಿ ಈ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ತಡೆ, ನವೀಕರಿಸಬಹುದಾದ ಇಂಧನಗಳ ಬಳಕೆ ಸೇರಿದಂತೆ ಹಲವು ವಿಷಯಗಳ ಕುರಿತು ತರಬೇತಿ ನೀಡಲಾಗುವುದು. ಪರಿಸರ ನಾಯಕತ್ವ ತರಬೇತಿಯನ್ನೂ ಒದಗಿಸಲಾಗುವುದು’ ಎಂದು ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ತಿಳಿಸಿದ್ದಾರೆ.