ಕಳೆದ ವರ್ಷದ ಮೇ 25ರಂದು ಸರ್ಕಾರಕ್ಕೆ ವರದಿ ಕಳುಹಿಸಿದ್ದ ಲೋಕಾಯುಕ್ತ ರಾಮಚಂದ್ರ ಅವರ ವಿರುದ್ಧದ ಆರೋಪ ಸಾಬೀತಾಗಿದ್ದು, ಪಿಂಚಣಿಯಲ್ಲಿ ಶೇ 5ರಷ್ಟನ್ನು ತಡೆಹಿಡಿಯುವಂತೆ ಸೂಚಿಸಿದ್ದರು. ಆನಂತರ ಕಳೆದ ವರ್ಷ ಅಕ್ಟೋಬರ್ನಲ್ಲಿ ಸಕ್ಷಮ ಪ್ರಾಧಿಕಾರ ದಂಡನೆ ಪೂರ್ವ ನೋಟಿಸ್ ಜಾರಿ ಮಾಡಿತ್ತು. ತಪ್ಪಿತಸ್ಥ ನಿವೃತ್ತ ಅಧಿಕಾರಿ ಆರೋಪ ಅಲ್ಲಗಳೆದರೂ ಸರ್ಮರ್ಥಿಸಿಕೊಳ್ಳಲು ವಿಫಲರಾಗಿದ್ದರು.