‘ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿಗಳಲ್ಲಿ ಆಚರಿಸಲಾಗುತ್ತದೆ. ಆದರೆ ಅದಕ್ಕೆ ಬಳಸುವ ಬಾವುಟದಲ್ಲಿ ಮೂಲ ಬಣ್ಣವೇ ಇರುವುದಿಲ್ಲ. ಐದಾರು ವರ್ಷಗಳ ಕಾಲ ಒಂದೇ ಬಾವುಟವನ್ನು ಉಪಯೋಗಿಸುವುದರಿಂದ ಬಾವುಟದ ಬಣ್ಣ ಮಾಸುತ್ತದೆ. ಅದನ್ನೇ ಅಧಿಕಾರಿಗಳು ಬಳಸುತ್ತಿದ್ದು, ಈ ವ್ಯವಸ್ಥೆ ಬದಲಾಗಬೇಕು’ ಎನ್ನುತ್ತಾರೆ ಬಿಳಿಜಾಜಿ ಗ್ರಾಮದ ನಿವಾಸಿ ಗೋವಿಂದ ರಾಜು.