ಕೇಂದ್ರ ಕೃಷಿ ವಿಶ್ವವಿದ್ಯಾಲಯದ ಅಧ್ಯಕ್ಷ ಪ್ರೊ. ಎಸ್. ಅಯ್ಯಪ್ಪನ್, ‘ಟೊಮೆಟೊ ಒಂದು ಹಣ್ಣು, ಅದು ತರಕಾರಿ ಅಲ್ಲ ಎನ್ನುವುದು ಜ್ಞಾನ. ಟೊಮೆಟೊ ಒಂದು ಹಣ್ಣು. ಆದರೂ ಫ್ರೂಟ್ ಸಲಾಡ್ನಲ್ಲಿ ಅದನ್ನು ಬಳಸುವಂತಿಲ್ಲ ಎಂಬುದು ಬುದ್ಧಿವಂತಿಕೆ. ಇಂತಹ ಮಾಹಿತಿ, ಜ್ಞಾನ ಹಾಗೂ ಬುದ್ಧಿವಂತಿಕೆಗಳನ್ನು ಮುಂದಿನ ಪೀಳಿಗೆಗೆ ಅರ್ಥ ಮಾಡಿಸಬೇಕು. ಕೃಷಿಯ ಆತ್ಮ ಮಣ್ಣು ಎಂಬ ಅರಿವು ಮೂಡಿಸಬೇಕು’ ಎಂದರು.