‘ವಂಚನೆಗೆ ಸಂಬಂಧಪಟ್ಟಂತೆ ಸಂಘದ ಮಾಜಿ ನಿರ್ದೇಶಕ ಎ.ಪಿ. ನಾಣಯ್ಯ ಅವರು ದೂರು ನೀಡಿದ್ದರು. ನಿರ್ದೇಶಕರಾದ ಎಚ್.ಎಂ. ಶೃಗೇಶ್ವರ, ಕೆ.ಎನ್. ರಾಮಕೃಷ್ಣರೆಡ್ಡಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಾಪ್ ಚಂದ್ ರಾಥೋಡ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ, ರಾಮಕೃಷ್ಣ ಹಾಗೂ ಪ್ರತಾಪ್ ಅವರನ್ನು ಬಂಧಿಸಲಾಗಿದೆ. ಸದ್ಯ ಅವರಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.