ಬಳ್ಳಾರಿ: ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ವಿಜಯದಶಮಿಯ ದಿನವಾದ ಮಂಗಳವಾರ ಮೃತಪಟ್ಟ ರೈತ ಕಟ್ಟೆಬಸಪ್ಪ (60) ಅವರ ಮೃತದೇಹದ ಮುಂದೆ ಅಳುತ್ತಲೇ ಅವರ ಪತ್ನಿ ಈರಮ್ಮ (52) ಕೂಡ ಮೃತಪಟ್ಟರು.
ಅನಾರೋಗ್ಯಪೀಡಿತರಾಗಿದ್ದ ಕಟ್ಟೆಬಸಪ್ಪ ಬೆಳಿಗ್ಗೆ ಮೃತಪಟ್ಟಿದ್ದರು. ಅವರ ಸಾವಿನಿಂದ ಕಂಗಾಲಾಗಿದ್ದ ಈರಮ್ಮ ಕೂಡ ಪತಿಯ ಶವದ ಬಳಿಯೇ ಮೃತಪಟ್ಟಿದ್ದರಿಂದ ಇಡೀ ಗ್ರಾಮ ಶೋಕದಲ್ಲಿ ಮುಳುಗಿತ್ತು. ದಂಪತಿಗೆ ಪುತ್ರರು, ಪುತ್ರಿಯರು ಇದ್ದಾರೆ.