ಬೆಂಗಳೂರು: ಹೆಂಡತಿಯ ಕಿರುಕುಳ ತಾಳಲಾರದೆಟೆಕ್ಕಿಯೊಬ್ಬಆತ್ಮಹತ್ಯೆಗೆಶರಣಾದ ಘಟನೆ ಶುಕ್ರವಾರ ಸಂಜೆ ಇಲ್ಲಿನ ವಸತಿಸಂಕೀರ್ಣವೊಂದರಲ್ಲಿನಡೆದಿದೆ.
ಮೃತಶ್ರೀನಾದ್ಆಂಧ್ರಪ್ರದೇಶಮೂಲದವರಾಗಿದ್ದುಸಾಪ್ಟ್ವೇರ್ಕಂಪೆನಿಯೊಂದರಲ್ಲಿಕೆಲಸ ಮಾಡುತ್ತಿದ್ದರು. ಶ್ರೀನಾದ್ಬ್ಯಾಂಕ್ನಿಂದ ಸಾಲಮಾಡಿ ಮನೆಖರೀದಿಸಿದ್ದರು. ದುಂದು ವೆಚ್ಚಮಾಡದಂತೆಪತ್ನಿಗೆ ತಿಳಿ ಹೇಳಿದ್ದರು. ಅದರೆಹೆಂಡತಿರೇಖಾಐಷಾರಾಮಿ ಜೀವನ ನಡೆಸಿ ಅಧಿಕವೆಚ್ಚ ಮಾಡುತ್ತಿದ್ದರುಎಂದು ತಿಳಿದು ಬಂದಿದೆ.
ಖರ್ಚು ಕಡಿಮೆ ಮಾಡುವಂತೆ ಪತ್ನಿಗೆ ಶ್ರೀನಾದ್ ಸಲಹೆ ನೀಡುತ್ತಿದ್ದರೂಲೆಕ್ಕಿಸದೆದುಂದು ವೆಚ್ಚ ಮಾಡುವುದು ಮುಂದುವರಿಸಿದ್ದರು. ಶ್ರೀನಾದ್ಗೆ ಪತ್ನಿ ನಿತ್ಯಮಾನಸಿಕ ಕಿರುಕುಳ ನೀಡಿದ್ದು,ಇದರಿಂದ ನೊಂದುಆತ್ಮಹತ್ಯೆಮಾಡಿಕೊಂಡಿರುವುದಾಗಿ ವರದಿಯಾಗಿದೆ.
ರೇಖಾಆಸ್ತಿಯನ್ನುತನ್ನ ತಂದೆಯ ಹೆಸರಿಗೆ ವರ್ಗಾಯಿಸುವಂತೆ ಶ್ರೀನಾದ್ ಮೇಲೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ.ರೇಖಾಮತ್ತು ಅವರ ಹೆತ್ತವರ ಮೇಲೆಸೆಕ್ಷನ್306 ಅಡಿಯಲ್ಲಿಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.