‘ಓಲಾ ಚಾಲಕನಾಗಿ ಕೆಲಸ ಮಾಡುತ್ತಿದ್ದ ನನಗೆ ಲಾಕ್ಡೌನ್ ವೇಳೆಯಲ್ಲಿ ಸರಿಯಾಗಿ ಆದಾಯ ಬರಲಿಲ್ಲ. ಮನೆ ಬಾಡಿಗೆ ಕಟ್ಟುವುದೂ ಕಷ್ಟವಾಗಿದೆ. ಕೋಲಾರಕ್ಕೆ ಬಂದು ನೆಲೆಸಿದ್ದೇವೆ. ಮಕ್ಕಳನ್ನು ಇಲ್ಲಿಯೇ ಸೇರಿಸಬೇಕು ಎಂದು ನಿರ್ಧರಿಸಿದ್ದೇವೆ. ಆದರೆ, ಇಬ್ಬರು ಮಕ್ಕಳು ಬೆಂಗಳೂರಿನ ಎಚ್ಎಎಲ್ ಬಳಿಯ ಎಲ್.ಬಿ. ಶಾಸ್ತ್ರಿ ನಗರದಲ್ಲಿರುವ ಪ್ರೆಸಿಡೆನ್ಸಿ ಚರ್ಚ್ ಶಾಲೆಯಲ್ಲಿ ಓದುತ್ತಿದ್ದರು. ಇಬ್ಬರು ಮಕ್ಕಳ ಶುಲ್ಕವನ್ನು ಪಾವತಿಸಲು ಆಗಿಲ್ಲ. ಎರಡು ಕಂತು ಹಣ ಸೇರಿ ₹3 ಲಕ್ಷ ಕಟ್ಟಬೇಕಾಗಿದೆ’ ಎಂದು ಪೋಷಕ ವೆಂಕಪ್ಪ ಹೇಳಿದರು.