ಜೆಡಿಎಸ್ನ ಸಂದೇಶ್ ನಾಗರಾಜ್, ‘ಈಗಾಗಲೇ ಮೈಸೂರು ಗ್ರಾಮದಲ್ಲಿ ಚಿತ್ರನಗರಿ ನಿರ್ಮಾಣಕ್ಕಾಗಿ ಪ್ರವಾಸೋದ್ಯಮ ಇಲಾಖೆಯ ಯೋಜನೆಯ ರೂಪರೇಷೆ ಹಾಗೂ ಸಾಧ್ಯತಾ ವರದಿಯನ್ನು ಸಿದ್ಧಪಡಿಸಲು ಸಲಹಾ ಸೇವೆ ಪಡೆದಿದ್ದು, ಅದಕ್ಕಾಗಿ ₹ 36.75 ಲಕ್ಷ ಖರ್ಚು ಮಾಡಲಾಗಿದೆ. ಹೀಗಾಗಿ, ಅಲ್ಲಿಯೇ ಚಿತ್ರನಗರಿ ಸ್ಥಾಪಿಸಬಹುದು’ ಎಂದು ಸಲಹೆ ನೀಡಿದರು.