ಸೆ. 19ರಂದು ಘಟನೆ ನಡೆದಿದ್ದು, ಹರ್ಷ ಸ್ವರೂಪ್ ಎಂಬುವವರು ಹಲ್ಲೆಗೆ ಒಳಗಾಗಿದ್ದರು. ಈ ಬಗ್ಗೆ ಹರ್ಷ ಅವರು ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಅದರ ಬದಲು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಸಲಹೆ ನೀಡಿದ್ದರು. ಇದರಿಂದ ನೊಂದಿದ್ದ ಹರ್ಷ, ಇಡೀ ಘಟನೆಯ ಬಗ್ಗೆ ವಿವರಿಸಿ, ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ದೂರು ನೀಡಿದ್ದರು. ಕಮಿಷನರ್ ಸೂಚನೆಯಂತೆ ದೂರು ದಾಖಲಾಗಿದೆ.