‘ಈ ಕೆರೆ ಒಟ್ಟು ಆರು ಎಕರೆ ಪ್ರದೇಶ ಹೊಂದಿದೆ. ಹಲವು ವರ್ಷಗಳಿಂದ ತ್ಯಾಜ್ಯಗಳನ್ನು ಕೆರೆ ಆವರಣದಲ್ಲಿ ಸುರಿಯಲಾಗುತ್ತಿದೆ. ಇದರಿಂದ, ಸುಮಾರು 25 ಲಾರಿಯಷ್ಟು ತ್ಯಾಜ್ಯ ಇದೆ. ಕಟ್ಟಡ ತ್ಯಾಜ್ಯವನ್ನು ಸಹ ಇಲ್ಲಿ ಹಾಕಲಾಗಿದೆ. ಕೆರೆ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು’ ಎಂದು ಚೇಂಜ್ ಮೇಕರ್ಸ್ ಆಫ್ ಕನಕಪುರ ರೋಡ್ನ ಅಧ್ಯಕ್ಷ ಅಬ್ದುಲ್ ಅಲೀಂ ಒತ್ತಾಯಿಸಿದ್ದಾರೆ.