'ಜೆ.ಸಿ.ರಸ್ತೆ, ಕಲಾಸಿಪಾಳ್ಯ ಮುಖ್ಯ ರಸ್ತೆ, ಕೆ.ಆರ್.ಮಾರುಕಟ್ಟೆ, ತರಗುಪೇಟೆ, ಸುಲ್ತಾನ್ ಪೇಟೆ, ಎಸ್.ಜೆ.ಪಿ ರಸ್ತೆಯೂ ಸೇರಿ ನಗರದಲ್ಲಿ ವ್ಯಾಪಾರದ ಕೇಂದ್ರ ಭಾಗಗಳನ್ನು ಸೋಂಕು ನಿಯಂತ್ರಣಕ್ಕಾಗಿ ಪಾಲಿಕೆ ಸೀಲ್ಡೌನ್ ಮಾಡಿದೆ. ಆದರೆ, ಈವೆರೆಗೆ ಸೀಲ್ಡೌನ್ ತೆರವಾಗದ ಕಾರಣ ಅಲ್ಲಿನ ವ್ಯಾಪಾರಕ್ಕೆ ತೀವ್ರ ಪೆಟ್ಟು ಬಿದ್ದಂತಾಗಿದೆ. ಬಹುತೇಕ ವಾಣಿಜ್ಯ ಸಂಸ್ಥೆಗಳು ನಷ್ಟ ಕೂಪದಲ್ಲಿ ಸಿಲುಕಿವೆ' ಎಂದು ಸಿ.ಆರ್.ಜನಾರ್ಧನ್ ವಿವರಿಸಿದರು.