ವಾಹನ ತಡೆದಿದ್ದ ಚುನಾವಣಾಧಿಕಾರಿಗಳು, ಹಣಕ್ಕೆ ದಾಖಲೆ ಕೇಳಿದ್ದರು. ಸಿಬ್ಬಂದಿ ಕೊಟ್ಟಿದ್ದ ದಾಖಲೆಗಳಲ್ಲಿ ಗೊಂದಲಗಳಿದ್ದವು. ಸ್ಥಳಕ್ಕೆ ಬಂದ ಕಂಪನಿ ವ್ಯವಸ್ಥಾಪಕ ಮಧುಸೂದನ್, ‘24 ಎಟಿಎಂ ಘಟಕಗಳಿಗೆ ತುಂಬಬೇಕಿರುವ ಹಣವಿದು’ ಎಂದು ಹೇಳಿ ಕೆಲ ದಾಖಲೆಗಳನ್ನು ತೋರಿಸಿದ್ದರು. ಅದರಿಂದ ಸಮಾಧಾನಗೊಳ್ಳದ ಅಧಿಕಾರಿಗಳು, ಹಣ ಜಪ್ತಿ ಮಾಡಿದರು. ದಾಖಲೆ ಸಲ್ಲಿಸಿದ ಬಳಿಕವೇ ಹಣ ಬಿಡುಗಡೆ ಮಾಡುವುದಾಗಿ ಅಧಿಕಾರಿಗಳು ಹೇಳಿದರು.