ರಾಜರಾಜೇಶ್ವರಿನಗರ: ರಾಮೋಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಯುವ ಮುಖಂಡ ಚೇತನ್ ಹಾಗೂ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ವಿ. ವೇಣುಗೋಪಾಲ್ ಹಾಗೂ ಭೀಮನಕುಪ್ಪೆಯ ಜಿ. ಮಹೇಶ್ ಅವರು ವೈಯಕ್ತಿಕವಾಗಿ ₹25 ಲಕ್ಷ ಮೌಲ್ಯದ ಆಹಾರ ಕಿಟ್ ನೀಡಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಈ ಕಿಟ್ಗಳನ್ನು ಸಂತ್ರಸ್ತರಿಗೆ ವಿತರಿಸಿದರು.
ಚೇತನ್ ಹಾಗೂ ವೇಣುಗೋಪಾಲ್ ಮಾತನಾಡಿ, ‘ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಯಾವ ಪ್ರದೇಶದಲ್ಲಿಯೂ ಕೂಲಿ ಕಾರ್ಮಿಕರು ಹಸಿವಿನಿಂದ ಬಳಲಬಾರದು ಎಂಬುದು ನಮ್ಮ ಉದ್ದೇಶ. ಹೀಗಾಗಿ, ಈ ನೆರವು ನೀಡುತ್ತಿದ್ದೇವೆ’ ಎಂದರು.
ಗ್ರಾಮಪಂಚಾಯತಿ ಅಧ್ಯಕ್ಷೆ ರೂಪಾ ವೇಣುಗೋಪಾಲ್, ಉಪಾಧ್ಯಕ್ಷ ಜಿ.ಮಹೇಶ್, ರಾಜ್ಯ ಆರ್ಯ ಈಡಿಗರ ಸಂಘದ ನಿರ್ದೇಶಕ ಆರ್.ಪಿ.ಪ್ರಕಾಶ್, ಪಂಚಾಯತಿ ಸದಸ್ಯರಾದ ಎಲ್ಲಪ್ಪ, ರಾಕೇಶ್ಗೌಡ, ಮಾಜಿ ಅಧ್ಯಕ್ಷ ವೆಂಕಟೇಶ್, ಯುದ್ಧ ಭೂಮಿ ಹೋರಾಟ ಸೇನೆಯ ರಾಜ್ಯಘಟಕದ ಅಧ್ಯಕ್ಷ ಹೇಮಂತ್ರಾಜ್ ಇದ್ದರು.