‘ಅಗತ್ಯವಿರುವ ಎಲ್ಲರಿಗೂ ಪಡಿತರ ಕಿಟ್ ವಿತರಿಸಬೇಕು, ಹಾಪ್ಕಾಮ್ಸ್ ಮೂಲಕ ಹಣ್ಣು, ತರಕಾರಿ ಮತ್ತು ಮೊಟ್ಟೆ, ಮಾಂಸವನ್ನು ಕಡಿಮೆ ದರದಲ್ಲಿ ಒದಗಿಸಬೇಕು. ಅಂಗನವಾಡಿಗಳು ಮತ್ತು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಸರಬರಾಜು ಮಾಡುವುದನ್ನು ಮುಂದುವರಿಸಬೇಕು, ಮಕ್ಕಳು ಮತ್ತು ಗರ್ಭಿಣಿಯರಿಗೆ ವಾರದ ಐದು ದಿನ ಮೊಟ್ಟೆಗಳನ್ನು ನೀಡಬೇಕು, ಉಜ್ವಲ ಯೋಜನೆಯಡಿ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ ಲಭ್ಯವಾಗುವಂತೆ ನೋಡಿಕೊಳ್ಳಬೇಕು’ ಎಂದು ಸಂಘಟನೆಯ ಸಿದ್ಧಾರ್ಥ್ ಜೋಶಿ ಹಾಗೂ ವಿನಯ್ ಶ್ರೀನಿವಾಸ ಸಲಹೆ ನೀಡಿದ್ದಾರೆ.