ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲವಂತದ ಗರ್ಭಪಾತ: ದೂರು

Last Updated 18 ಸೆಪ್ಟೆಂಬರ್ 2019, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಆಡಳಿತ ಮಂಡಳಿಯವರು ಬಲವಂತವಾಗಿ ಗರ್ಭಪಾತ ಆಗು ವಂತೆ ಮಾಡಿದ್ದಾರೆ’ ಎಂದು ಆರೋ ಪಿಸಿ ಆಸ್ಟರ್‌ ಸಿಎಂಐ ಆಸ್ಪತ್ರೆಯ ಟೆಕ್ನಿಶಿ ಷಿಯನ್‌ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಸಹಕಾರ ನಗರದಲ್ಲಿರುವ ಆಸ್ಟರ್‌ ಸಿಎಂಐ ಆಸ್ಪತ್ರೆಯ ಸಿಇಒ ನಿತೀಶ್‌ ಶೆಟ್ಟಿ, ಸಿಒಒ ರಮೇಶ್‌, ಎಚ್‌ಆರ್‌ಗಳಾದ ದುರ್ಗಾಪ್ರಸಾದ್‌ ಮತ್ತು ಮಾರುತಿ ಎಂಬುವರ ವಿರುದ್ಧ ಯಲಹಂಕದ ಮಾರುತಿನಗರದ ನಿವಾಸಿ, 30 ವರ್ಷದ ಮಹಿಳೆ ದೂರು ನೀಡಿದ್ದಾರೆ.

‘ನಾನು ಗರ್ಭಿಣಿಯಾಗಿರುವ ವಿಷ ಯವನ್ನು ಆಡಳಿತ ಮಂಡಳಿ ಗಮನಕ್ಕೆ ತಂದಾಗ, ‘ನೀನು ಅಬಾರ್ಷನ್‌ ಮಾಡಿಸಿ ಕೊ. ಇಲ್ಲದಿದ್ದರೆ ಕೆಲಸದಿಂದ ವಜಾ ಮಾಡುತ್ತೇವೆ’ ಎಂದು ದುರ್ಗಾಪ್ರಸಾದ್‌ ಹೆದರಿಸಿದ್ದರು. ಕೆಲಸ ಬಿಡುವಂತೆ ಒತ್ತಾಯಿಸಿದಾಗ ನಾನು ರಾಜೀನಾಮೆ ಕೊಟ್ಟಿದ್ದೇನೆ. ನಿಯಮದಂತೆ ರಾಜೀ ನಾಮೆ ನೀಡಿದ ಬಳಿಕ ತಿಂಗಳ ಕೆಲಸ ಮಾಡಬೇಕಾಗಿತ್ತು. ಈ ಸಮಯದಲ್ಲಿ, ನನ್ನ ಪತಿಯ ಗಮನಕ್ಕೂ ತರದೆ ಜುಲೈ 27ರಂದು ಕೆಲವು ಮಾತ್ರೆ ಗಳನ್ನು ಕೊಟ್ಟು, 29ರಂದು ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದಾರೆ’ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

‘ಮಹಿಳೆಯ ಆರೋಪ ಆಧಾರರಹಿತ’

ಆಸ್ಟರ್‌ ಸಿಎಂಐ ಆಸ್ಪತ್ರೆ ಆಡಳಿತ ಮಂಡಳಿ ಪ್ರತಿಕ್ರಿಯಿಸಿ, ‘ದೂರುದಾರ ಮಹಿಳೆ ಹೊಟ್ಟೆ ನೋವಿನಿಂದ ಜು. 29ರಂದು ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ನಡೆಸಿದಾಗ ಹೊಟ್ಟೆಯಲ್ಲಿದ್ದ ಭ್ರೂಣ ಸತ್ತು ಹೋಗಿರುವುದು ಗೊತ್ತಾಗಿತ್ತು. ತಕ್ಷಣವೇ ಭ್ರೂಣ ಹೊರಬರುವಂತೆ ಮಾಡಲಾಗಿದೆ. ಮಹಿಳೆ ಮಾಡಿರುವ ಆಧಾರರಹಿತ ಆರೋಪಗಳ ವಿರುದ್ಧ ಕಾನೂನು ಕ್ರಮಕ್ಕೆ ನಿರ್ಧರಿಸಿದ್ದೇವೆ’ ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT