<p><strong>ಬೆಂಗಳೂರು</strong>: ವೇಗ ಹಾಗೂ ಒತ್ತಡದ ಬದುಕಿನಲ್ಲಿ ಮನುಷ್ಯರಿಗೆ ಹಠಾತ್ ಆಘಾತಗಳು ಹೆಚ್ಚಾಗುತ್ತಿವೆ. ಸೇವಾ ಮನೋಭಾವದ ಟ್ರಾಮಾ ಚಿಕಿತ್ಸಾ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾದರೆ, ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗುವುದರಿಂದ ಜೀವಗಳು ಉಳಿಯಲು ಸಾಧ್ಯವಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ತಿಳಿಸಿದರು.</p>.<p>ಜಯನಗರ 1ನೇ ಬ್ಲಾಕ್ ನಲ್ಲಿರುವ ಮಹಾಬೋಧಿ ಮಿದುಳು ಆಸ್ಪತ್ರೆಯಲ್ಲಿ ಹೊಸ ಟ್ರಾಮಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಜ್ಞಾನ, ಪ್ರೀತಿ ಹಾಗೂ ಕರುಣೆಯ ಬುದ್ಧನ ತತ್ವಗಳನ್ನುಅಳವಡಿಸಿಕೊಂಡು ಮಹಾಬೋಧಿ ಆಸ್ಪತ್ರೆಯು ಸೇವಾ ನಿರತವಾಗಿದೆ ಎಂದು ಶ್ಲಾಘಿಸಿದರು.</p>.<p>ನರಶಸ್ತ್ರ ಚಿಕಿತ್ಸಕ ಡಾ.ಎನ್.ಕೆ. ವೆಂಕಟರಮಣ ಮಾತನಾಡಿ, ‘ಮನಸ್ಸು ಮತ್ತು ಮಿದುಳು ಸರಿಯಾಗಿದ್ದರೆ ಇಡೀ ಸಮಾಜವು ಆರೋಗ್ಯ ಹಾಗೂ ನೆಮ್ಮದಿಯಿಂದ ಇರುತ್ತದೆ. ಇದು ಬುದ್ಧನ ತತ್ವವೂ ಆಗಿದೆ’ ಎಂದರು.</p>.<p>ಆಸ್ಪತ್ರೆಯ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಬುದ್ಧನ ವಿಗ್ರಹವನ್ನು ಇದೇ ವೇಳೆ ಅನಾವರಣಗೊಳಿಸಲಾಯಿತು.</p>.<p>ಮಹಾಬೋಧಿ ಸೊಸೈಟಿಯ ಆಚಾರ್ಯ ಬುದ್ಧ ರಕ್ಷಿತ, ಕಸ್ಸಪ ಮಹಾಥೇರ, ಆನಂದ ಭಂತೇಜಿ, ಶ್ರೀರಾಮ್ ರೂಪನಗುಂಟ, ನರ ಶಸ್ತ್ರಚಿಕಿತ್ಸಕ ಡಾ.ಜಿ. ನಾರಾಯಣ ರೆಡ್ಡಿ, ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ವೇಗ ಹಾಗೂ ಒತ್ತಡದ ಬದುಕಿನಲ್ಲಿ ಮನುಷ್ಯರಿಗೆ ಹಠಾತ್ ಆಘಾತಗಳು ಹೆಚ್ಚಾಗುತ್ತಿವೆ. ಸೇವಾ ಮನೋಭಾವದ ಟ್ರಾಮಾ ಚಿಕಿತ್ಸಾ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾದರೆ, ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗುವುದರಿಂದ ಜೀವಗಳು ಉಳಿಯಲು ಸಾಧ್ಯವಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ತಿಳಿಸಿದರು.</p>.<p>ಜಯನಗರ 1ನೇ ಬ್ಲಾಕ್ ನಲ್ಲಿರುವ ಮಹಾಬೋಧಿ ಮಿದುಳು ಆಸ್ಪತ್ರೆಯಲ್ಲಿ ಹೊಸ ಟ್ರಾಮಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಜ್ಞಾನ, ಪ್ರೀತಿ ಹಾಗೂ ಕರುಣೆಯ ಬುದ್ಧನ ತತ್ವಗಳನ್ನುಅಳವಡಿಸಿಕೊಂಡು ಮಹಾಬೋಧಿ ಆಸ್ಪತ್ರೆಯು ಸೇವಾ ನಿರತವಾಗಿದೆ ಎಂದು ಶ್ಲಾಘಿಸಿದರು.</p>.<p>ನರಶಸ್ತ್ರ ಚಿಕಿತ್ಸಕ ಡಾ.ಎನ್.ಕೆ. ವೆಂಕಟರಮಣ ಮಾತನಾಡಿ, ‘ಮನಸ್ಸು ಮತ್ತು ಮಿದುಳು ಸರಿಯಾಗಿದ್ದರೆ ಇಡೀ ಸಮಾಜವು ಆರೋಗ್ಯ ಹಾಗೂ ನೆಮ್ಮದಿಯಿಂದ ಇರುತ್ತದೆ. ಇದು ಬುದ್ಧನ ತತ್ವವೂ ಆಗಿದೆ’ ಎಂದರು.</p>.<p>ಆಸ್ಪತ್ರೆಯ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಬುದ್ಧನ ವಿಗ್ರಹವನ್ನು ಇದೇ ವೇಳೆ ಅನಾವರಣಗೊಳಿಸಲಾಯಿತು.</p>.<p>ಮಹಾಬೋಧಿ ಸೊಸೈಟಿಯ ಆಚಾರ್ಯ ಬುದ್ಧ ರಕ್ಷಿತ, ಕಸ್ಸಪ ಮಹಾಥೇರ, ಆನಂದ ಭಂತೇಜಿ, ಶ್ರೀರಾಮ್ ರೂಪನಗುಂಟ, ನರ ಶಸ್ತ್ರಚಿಕಿತ್ಸಕ ಡಾ.ಜಿ. ನಾರಾಯಣ ರೆಡ್ಡಿ, ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>