ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಳಿವಿನತ್ತ ಜನಪದ ಕಲೆಗಳು’

Last Updated 6 ಫೆಬ್ರುವರಿ 2018, 10:00 IST
ಅಕ್ಷರ ಗಾತ್ರ

ಧಾರವಾಡ: ‘ಆಧುನಿಕತೆಯ ಅಬ್ಬರದಲ್ಲಿ ‍ಪರಂಪರೆಯ ಭಾಗವಾಗಿರುವ ಹಲವು ಕಲೆಗಳು ನಶಿಸುತ್ತಿವೆ. ಅವುಗಳನ್ನು ಉಳಿಸಿ, ಬೆಳೆಸುವುದು ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾ ಗೋಂದಳಿ ಸಮಾಜದ ವತಿಯಿಂದ ಏರ್ಪಡಿಸಿದ್ದ ‘ಗೊಂದಳಿಗರ ಹಾಡುಗಳು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಬದಲಾದ ಸಂದರ್ಭದಲ್ಲಿ ಗೊಂದಲಿಗ ಸಮುದಾಯದ ಯುವಪೀಳಿಗೆ ಈ ಕಲಾ ಪ್ರಕಾರವನ್ನು ತಮ್ಮದಾಗಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ’ ಎಂದು ಅವರು ಹೇಳಿದರು. 

ಎ.ಎಂ.ಮದರಿ, ದೀಪಕ ಚಿಂಚೋರೆ, ಶಂಕರ ಸುಗತೆ, ಡಿ.ವೈ. ಬಗಲೆ, ವಿಶಾಲ ಸುಗತೆ, ನಾಗೆಂದ್ರ ದುಮ್ಮಾಳೆ, ಸುರೇಶ ಗೊಂದಳಿ, ಪ್ರಕಾಶ ಸಿಂಗನಾಥ, ಸತೀಶ ದುಮ್ಮಾಳೆ ಇದ್ದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಪ್ಪ ಸುಗತೆಕರ ಅವರಿಗೆ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT